ಪೆಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ವೈಮಾನಿಕ ದಾಳಿಯಿಂದ ಪಾಕಿಸ್ತಾನ ೯ ಉಗ್ರ ಅಡಗುತಾಣ ನೆಲಸಮಗೊಂಡಿದೆ. ಸದ್ಯ ಇಂಟರ್ನೆಟ್ ನಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊವೊಂದರಲ್ಲಿ, ಪಾಕಿಸ್ತಾನಿ ಟಿವಿ ಚಾನೆಲ್ ನ ಸುದ್ದಿ ನಿರೂಪಕಿ ಎಂದು ಹೇಳಲಾದ ಮಹಿಳೆಯೊಬ್ಬರು ಸುದ್ದಿ ನೇರ ಪ್ರಸಾರದ ಸಮಯದಲ್ಲಿ ದುಃಖಿಸುತ್ತಿರುವುದು ಕಂಡುಬಂದಿದೆ. ವೀಡಿಯೊದಲ್ಲಿ, ‘ಆಪರೇಷನ್ ಸಿಂಧೂರ್’ ನ ಭಾಗವಾಗಿರುವ ಭಾರತೀಯ ವೈಮಾನಿಕ ದಾಳಿಯ ನಂತರ ಜೀವಹಾನಿ ಸಂಭವಿಸಿದ್ದಕ್ಕಾಗಿ ಉಸಿರುಗಟ್ಟಿದ ಧ್ವನಿಯೊಂದಿಗೆ, ದಾಳಿಯಿಂದ ಪ್ರಭಾವಿತರಾದ ಮುಗ್ಧ ಆತ್ಮಗಳಿಗೆ ಅಲ್ಲಾಹನಿಂದ ಶಕ್ತಿ ಮತ್ತು ಕರುಣೆಗಾಗಿ ಅವರು ಮನವಿ ಮಾಡುತ್ತಾ ಕಣ್ಣೀರು ಹಾಕುತ್ತಾ ದುಃಖಿಸುತ್ತಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸತ್ಯಾಸತ್ಯತೆ ಕೂಡಿದೆ ಎಂದು ಸ್ಪಷ್ಟವಿಲ್ಲ. ಅಳುತ್ತಿರುವ ಟಿವಿ ನಿರೂಪಕಿ ಮಹಿಳೆ ಸುದ್ದಿ ವಾಹಿನಿಗೆ ಸಂಬಂಧಿಸಿದ್ದಾಳೆ ಅಥವಾ ಇಲ್ವಾ ಎಂಬುದರ ಬಗ್ಗೆ ಯಾವುದೇ ಸ್ಪಷ್ಟ ವರದಿಗಳಿಲ್ಲ. ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ 26 ನಾಗರಿಕರನ್ನು ಕೊಂದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆಸಲಾದ ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತವು ಇತ್ತೀಚೆಗೆ ನಡೆಸಿದ ಮಿಲಿಟರಿ ಕ್ರಮಕ್ಕೆ ಪ್ರತಿಕ್ರಿಯೆಯಾಗಿ ಈ ಭಾವನಾತ್ಮಕ ಪ್ರಕೋಪವನ್ನು ವ್ಯಾಪಕವಾಗಿ ಅರ್ಥೈಸಲಾಗುತ್ತಿದೆ. ಮೋದಿ ಹೋಗಿ ಹೇಳು ಎಂದು ಭಯೋತ್ಪಾದಕರು ಹೇಳಿದ್ದರೆನ್ನಲಾದ ಮಾತಿಗೆ ಮೋದಿ ಸರಿಯಾಗಿ ಉತ್ತರ ನೀಡಿದ್ದಾರೆ ಎಂದು ಭಾರತೀಯರು ಸಂತಸ ಪಟ್ಟಿದ್ದಾರೆ.
ಆಪರೇಷನ್ ಸಿಂಧೂರ್ ಗೆ ಪಾಕ್ ನ ಟಿವಿ ನಿರೂಪಕಿ ಕಣೀರು?
